Posts

Showing posts from May, 2026

ಸುಹಾಸ್ತಿ

Image
ಸುಹಾಸ್ತಿ ಅಂದ ತಕ್ಷಣ ನೆನಪಾಗುವುದು ಬೆಂಗಳೂರಿನ ಒಂದು ಯುವಕರ ತಂಡ. ಅವರು ನಡೆಸುವ ಕಬಡ್ಡಿ ಪಂದ್ಯಾ. ಅವರು ನಡೆಸುವ ಲಗೋರಿ ಪಂದ್ಯಾ. ಅವರ ಸ್ವಚ್ಚತಾ ಆಂದೋಲನ ಅವರಿಗಿರುವ ಪರಿಸರ ಕಾಳಜಿ. ಹೌದು ಕಳೆದ ನಾಲ್ಕು ವರ್ಷಗಳಿಂದ ಸದಾ ಒಂದಲ್ಲ ಒಂದು ಕಾರ್ಯಚಟುವಟಿಕೆಯಲ್ಲಿ ತಮ್ಮ ನ್ನು ತಾವು ತೋಡಗಿಸಿಕೊಂಡಿರುವ ಬೆಂಗಳೂರಿನ ಯುವಕರ ತಂಡವೇ ಸುಹಾಸ್ತಿ ಯುವ ಜೈನ್ ಮಿಲನ್, ದಿನಾಂಕ.05-08-2014 ರಂದು ಪ್ರಾರಂಭವಾದ ಯುವ ಜೈನ್ ಮಿಲನ್ ಅದೇ ವರ್ಷದಿಂದ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಳ್ಳುತ್ತ ಬಂದಿತ್ತು. ಅವುಗಳಲ್ಲಿ ಮುಖ್ಯವಾದವು ಆಗತಾನೆ ಅಸ್ಥಿತ್ವಕ್ಕೆ ಬಂದ ಮೋದಿ ಸರ್ಕಾರದ. ಸ್ವಚ್ಚ. ಭಾರತ ಆಂದೋಲನಕ್ಕೆ ಕೈ ಜೋಡಿಸಿದ ಸುಹಾಸ್ತಿ ಯುವ ಜೈನ್ ಮಿಲನ್ ಜಿನ ಬಸದಿಗಳ ಸ್ವಚ್ಚತಾ ಕಾರ್ಯಕ್ರಮವನ್ನು ಸತತ ನಾಲ್ಕು ವರ್ಷಗಳಿಂದ ಮಾಗಡಿ ರೋಡ್ ಜೈನ್ ಟೆಂಪಲ್ ಪುಟ್ಟೆನ್ ಳ್ಳಿ ಜೈನ್ ಟೆಂಪಲ್. ಮಂದಾರಗಿರಿ ಜೈನ್ ಟೆಂಪಲ್ ಸಾಗರ ತಾಲ್ಲೂಕು ಶಿವಮೊಗ್ಗ ಜಿಲ್ಲೆಯ ಹಾರಿಗೆ ಜೈನ್ ಟೆಂಪಲ್ ಹಾಗೆ ಹಲವಾರು ಜಿನ ಮಂದಿರದ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿ ಕೊಂಡು ವಿಭಿನ್ನ ರೀತಿಯಲ್ಲಿ ಧರ್ಮ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ . ವಿಶ್ವ ಪರಿಸರ ದಿನದ ಅಂಗವಾಗಿ ಪ್ರತಿ ವರ್ಷವೂ ಗಿಡಗಳನ್ನು ನೆಡುತ್ತಾ ಬರುತ್ತಿರುವ ಈ ಜೈನ ಯುವಕರ ತಂಡ ಬೆಂಗಳೂರಿನ ಆನಂದ ಮಾರ್ಗ ಅನಾಥಾಶ್ರಮದ ಸುತ್ತಮುತ್ತ ನಗರದ ಲಗ್ಗೇರೆ ಬಡವಾಣೆ ಇತ್ತೀಚೆಗೆ (08-06-2018)ಮಂದಾರ...