ಪೂಜ್ಯ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಮಾನವ ಜೀವನವು ಧರ್ಮ, ಸೇವೆ ಮತ್ತು ಸತ್ಯದ ಮಾರ್ಗದಲ್ಲಿ ಸಾಗಿದಾಗ ಅದು ಸಮಾಜಕ್ಕೆ ಬೆಳಕಾಗುತ್ತದೆ. ಅಂತಹ ದಿವ್ಯ ಸೇವಾಭಾವದಿಂದ ಸಮಾಜವನ್ನು ಉನ್ನತಿಗೆ ಎತ್ತಲು ತಮ್ಮ ಜೀವನವನ್ನು ಸಮರ್ಪಿಸಿದ ಮಹಾನ್ ವ್ಯಕ್ತಿತ್ವಗಳಲ್ಲಿ ಪೂಜ್ಯ ಶ್ರೀಮತಿ ಹೇಮಾವತಿ ವಿ. ಹೆಗ್ಗಡೆಯವರು ಪ್ರಮುಖರು. 1951ರ ಏಪ್ರಿಲ್ 2ರಂದು ದಕ್ಷಿಣ ಕನ್ನಡ ಜಿಲ್ಲೆಯ ಪೆರಾಡಿಯಲ್ಲಿ ಜನಿಸಿದ ಹೇಮಾವತಿ ಅವರ ಬಾಲ್ಯದಿಂದಲೇ ಧಾರ್ಮಿಕ ಚಿಂತನೆ, ಸಮಾಜಸೇವೆಯ ಮನೋಭಾವ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಬೆಳೆದರು. ನಂತರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿಯಾಗಿ, ಧರ್ಮಸ್ಥಳದ ಸೇವಾ ಪರಂಪರೆಯಲ್ಲಿ ತಮ್ಮ ಜೀವನವನ್ನು ಸಮರ್ಪಿಸಿದರು. ಧರ್ಮಸ್ಥಳದ ಪವಿತ್ರ ವಾತಾವರಣದಲ್ಲಿ ಬೆಳೆದ ಅವರ ಚಿಂತನೆ ಸಮಾಜದ ಹಿತದತ್ತ ತಿರುಗಿತು. ವಿಶೇಷವಾಗಿ ಗ್ರಾಮೀಣ ಮತ್ತು ದುರ್ಬಲ ವರ್ಗದ ಮಹಿಳೆಯರು ಸಮಾಜದಲ್ಲಿ ಸಬಲರಾಗಬೇಕು ಎಂಬ ಮಹೋನ್ನತ ಆಶಯವನ್ನು ಅವರು ಹೃದಯದಲ್ಲಿ ಬೆಳೆಸಿಕೊಂಡರು. ಈ ಸಂಕಲ್ಪವೇ ಮುಂದೆ “ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ” ಎಂಬ ಮಹತ್ತರ ಚಳುವಳಿಯಾಗಿ ರೂಪುಗೊಂಡಿತು. ಈ ಕಾರ್ಯಕ್ರಮದ ಮೂಲಕ ಗ್ರಾಮೀಣ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿ, ಅವರಿಗೆ ಶಿಕ್ಷಣ, ಸ್ವಚ್ಛತೆ, ಆರೋಗ್ಯ, ಕುಟುಂಬ ಸಾಮರಸ್ಯ, ಕಾನೂನು ಅರಿವು ಹಾಗೂ ಸ್ವ ಉದ್ಯೋಗದ ತರಬೇತಿಗಳನ್ನು ನೀಡುವ ಮಹತ್ವದ ಕಾರ್ಯ ಆರಂಭಿ...
Comments
Post a Comment